ಕಾರ್ಯಕ್ರಮ ಅನುಷ್ಠಾನ

ಅಕ್ಷರ ದಸೊಹ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರುವಾಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ಜೊತೆ ಜೊತೆಯಾಗಿ ಕೆಲಸ ಮಾಡುತ್ತದ. ಕೇಂದ್ರ ಸರ್ಕಾರವು ಯೋಜನೆಯನ್ನು ಕಾರ್ಯಗತಗೊಳಿಸುವಾಗ ರಾಜ್ಯದಲ್ಲಿ ಸರ್ಕಾರಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನೀಡುತ್ತದೆ. ಆದಾಗ್ಯೂ, ಕೇಂದ್ರ ಮಾರ್ಗಸೂಚಿಗಳಿಗೆ ಭಿನ್ನವಾಗಿ ಕೂಡ ಕೆಲವು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ.

ಈ ಆಯೋಜನೆಯ ಮೇಲ್ವಿಚಾರಣೆ ಮತ್ತು ಪರಿಣಾಮಗಳನ್ನು ವಿಶ್ಲೇಷಿಸಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೀತಿ ಸಲಹೆ ಒದಗಿಸಲು ರಾಷ್ಟ್ರೀಯ ಸ್ಟೀರಿಂಗ್ ಕಮ್ ಮಾನಿಟರಿಂಗ್ ಕಮಿಟಿಯನ್ನು  ಸ್ಥಾಪಿಸಲಾಗಿದೆ. ಕಾರ್ಯಕ್ರಮ ಅನುಮೋದನೆ ಬೋರ್ಡ್ ಸಮಿತಿಯ ವಾರ್ಷಿಕ ಕಾರ್ಯಯೋಜನೆ ಸಲ್ಲಿಕೆ ಮೇಲೆ ಕೇಂದ್ರ  ಸಬ್ಸಿಡಿಗಳ ನೆರವು  ರೂಪದಲ್ಲಿ ಬಿಡುಗಡೆ ಮಾಡುತ್ತದೆ.

ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಒಂದು  ಸ್ಟೀರಿಂಗ್ ಕಮ್ ಮಾನಿಟರಿಂಗ್ ಸಮಿತಿಯನ್ನು ನಿರ್ಮಿಸಲಾಗುತ್ತದೆ.  ಒಂದು ನೋಡಲ್ ಇಲಾಖೆಗೆ ಈ  ಜವಾಬ್ದಾರಿಯನ್ನು ನೀಡಲಾಗಿದೆ. ಅನುಷ್ಠಾನವನ್ನು ನೋಡಲ್ ಡಿಪಾರ್ಟ್ಮೆಂಟ್ ಆಯೋಜಿಸಬೇಕು ಮತ್ತು ಕಾರ್ಯಕ್ರಮದ ಪರಿಣಾಮಕಾರಿ ಜಾರಿಗೆ ಪ್ರತಿ ಜಿಲ್ಲೆಯ ಮಟ್ಟದಲ್ಲಿ ಮತ್ತು ಬ್ಲಾಕ್ ಮಟ್ಟದಲ್ಲಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಬೇಕು

ಪ್ರಾಥಮಿಕ ಶಿಕ್ಷಣದ ಜವಾಬ್ದಾರಿ ನೀಡಿರುವ ಘಟಕಗಳಿಗೆ  ಪಂಚಾಯತ್‌ಗಳು / ನಗರ ಸಂಸ್ಥೆಗಳು ರಾಜ್ಯಗಳಲ್ಲಿ ಯೋಜನೆಯ ಉಸ್ತುವಾರಿಯಾಗಿರುತ್ತದೆ.

ಹಣದ ಹರಿವು  

ಭಾರತ ಸರ್ಕಾರ ಪರವಾಗಿ ರಾಜ್ಯಗಳಿಗೆ ಹಣ ಮತ್ತು ಆಹಾರ ಧಾನ್ಯಗಳ ಪೂರೈಕೆ (ಕೇಂದ್ರ ನೆರವು) ಅನುಮೋದಿಸುವ ಮಧ್ಯವರ್ತಿಯಾಗಿ  ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಕಾರ್ಯ ನಿರ್ವಹಿಸುತ್ತದೆ

ಧಾನ್ಯಗಳ ಹರಿವು

ಚಿತ್ರಗಳ ಮೂಲ: ಯೋಜನಾ ಆಯೋಗ,  ಭಾರತ ಸರ್ಕಾರ

The Best Way to Make a Difference in the Lives of Others